ಸೋಮವಾರ, ಜನವರಿ 21, 2013

ವೇದಾಂತಿ ಹೇಳಿದನು....

ಚಿತ್ರ: ಮಾನಸ ಸರೋವರ 
ಸಂಗೀತ: ವಿಜಯ ಭಾಸ್ಕರ್
ಸಾಹಿತ್ಯ:ವಿಜಯನಾರಸಿಂಹ 
ನಿರ್ದೇಶನ:ಪುಟ್ಟಣ್ಣ ಕಣಗಾಲ್
ಗಾಯಕರು:ಪಿ ಬಿ ಶ್ರೀನಿವಾಸ್ 


ವೇದಾಂತಿ ಹೇಳಿದನು,ಹೊನ್ನೆಲ್ಲ ಮಣ್ಣು ,ಮಣ್ಣು,
ಕವಿಯೊಬ್ಬ ಹಾಡಿದನು,ಮಣ್ಣೆಲ್ಲ ಹೊನ್ನು ಹೊನ್ನು,
ವೇದಾಂತಿ ಹೇಳಿದನು,ಹೊನ್ನೆಲ್ಲ ಮಣ್ಣು ,ಮಣ್ಣು,
ಕವಿಯೊಬ್ಬ ಹಾಡಿದನು,ಮಣ್ಣೆಲ್ಲ ಹೊನ್ನು ಹೊನ್ನು,

ವೇದಾಂತಿ ಹೇಳಿದನು,.ಈ ಹೆಣ್ಣು ಮಾಯೆ ಮಾಯೆ,
ಕವಿಯೊಬ್ಬ ಕನವರಿಸಿದನು,ಓ ಇವಳೇ ಚೆಲುವೆ,
ಇವಳ ಜೊತೆಯಲ್ಲಿ ನಾನು ಸ್ವರ್ಗವನೇ ಗೆಲ್ಲುವೆ,ಸ್ವರ್ಗವನೇ ಗೆಲ್ಲುವೆ,

ವೇದಾಂತಿ ಹೇಳಿದನು,ಹೊನ್ನೆಲ್ಲ ಮಣ್ಣು ,ಮಣ್ಣು,
ಕವಿಯೊಬ್ಬ ಹಾಡಿದನು,ಮಣ್ಣೆಲ್ಲ ಹೊನ್ನು ಹೊನ್ನು,

 ವೇದಾಂತಿ ಹೇಳಿದನು,ಈ ಬದುಕು ಶೂನ್ಯ ಶೂನ್ಯ,
ಕವಿ ನಿಂತು ಸಾರಿದನು,ಓ...ಇದು ಅಲ್ಲ ಶೂನ್ಯ,
ಜನ್ಮ ಜನ್ಮದಿ ಸವಿದೆ,ನಾನೆಷ್ಟು ಧನ್ಯ ನಾನೆಷ್ಟು ಧನ್ಯ...

ವೇದಾಂತಿ ಹೇಳಿದನು,ಹೊನ್ನೆಲ್ಲ ಮಣ್ಣು ,ಮಣ್ಣು,
ಕವಿಯೊಬ್ಬ ಹಾಡಿದನು,ಮಣ್ಣೆಲ್ಲ ಹೊನ್ನು ಹೊನ್ನು,
ಮಣ್ಣೆಲ್ಲ ಹೊನ್ನು ಹೊನ್ನು,ಮಣ್ಣೆಲ್ಲ ಹೊನ್ನು ಹೊನ್ನು, 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ